ಅಗೋಚರ
ಸುಮ್ಮನೇ ಕುಳಿತಿರಲು ಮನದ ಬರುಭೂಮಿಯಲಿ ಬರುವ ನೂರು ನೆನಪುಗಳ ಹೆಸರು ನೀನೇ..!
ಆ ಹೆಸರ ಹೇಳುತ್ತ ಮನವೆಂಬ ಮಾಯಾವಿ ನುದಿಸುತಿಹ ನೋಡಿಲ್ಲಿ ಈ ರುದ್ರವೀಣೆ..!
ತಿಳಿಯದಾದರು ಎನಗೆ ತಂತಿಯ ಬಲವು,
ರಭಸದಲಿ ಮೀಟಲೆನಗೊಂದಿಷ್ಟು ಭಯವು.
ಇಂಪಾದ ಧ್ವನಿಯೊಂದು ಬಾರದಿದ್ದರೂ ಎಂದೂ,
ಧ್ವನಿಯೊಂದು ಇದೆಯೆಂಬ ಸಾಂತ್ವನವು ಮನಕಿಂದು.
ಮುಂದೊಮ್ಮೆ ಹೇಗೋ ಇಂಪಾದ ಧ್ವನಿಯೊಂದು,
ಮೂದಲೂಬಹುದೆಂಬ ಆಸೆ ಮನದಂಚಿನಲೊಂದು.
ನಿನ್ನ ಸುಂದರ ನೆನಪುಗಳು ಕಾಡಿರಲು ಮನವನ್ನು,
ಸುಮ್ಮನೇ ದಿಟ್ಟಿಸುವೆ ತಂತಿಯನು,ಮೇಲಿರುವ ನನ್ನ ಬೆರಳನ್ನೂ.....!
--Apoorva chandra
